ಲಂಡನ್/ಹೊಸದಿಲ್ಲಿ: ಬ್ಯಾಂಕ್ಗಳಿಗೆ ವಂಚಿಸಿ ಪರಾರಿಯಾಗಿರುವ ಉದ್ಯಮಿ ನೀರವ್ ಮೋದಿಗೆ ಕಂದಾಯ ಗುಪ್ತಚರ ಸಂಸ್ಥೆ DRI ರವಿವಾರ ಇಮೇಲ್ ಮೂಲಕ ಬಂಧನ ವಾರಂಟ್ ಜಾರಿ ಮಾಡಿದೆ. ಕಸ್ಟಮ್ಸ್ ತೆರಿಗೆ ತಪ್ಪಿಸಿಕೊಂಡ ಆರೋಪಕ್ಕೆ ಸಂಬಂಧಿಸಿ ಈ ಕ್ರಮ ಕೈಗೊಳ್ಳಲಾಗಿದೆ. ಪ್ರಕರಣ ಸಂಬಂಧ ಕೋರ್ಟ್ಗೆ ಹಾಜರಾಗದ ಹಿನ್ನೆಲೆಯಲ್ಲಿ ಸೂರತ್ ನಲ್ಲಿನ ಕೋರ್ಟ್ ಈ ವಾರಂಟ್ ಜಾರಿ ಮಾಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆಮದು ಶುಲ್ಕ ತಪ್ಪಿಸಿಕೊಳ್ಳುವ ಸಲುವಾಗಿ, ನೀರವ್ ಕಳಪೆ ಗುಣಮಟ್ಟದ ವಜ್ರ ಹಾಗೂ ಹರಳುಗಳನ್ನು ರಫ್ತು ಮಾಡಿದ್ದಲ್ಲದೆ, ಅವುಗಳನ್ನು ಆಮದು […]
↧